Sunday, November 7, 2010

ಬಾರೆ ಭಾವದ ಗೆಳತಿ

ನಿನ್ನ ಹೊಳೆವ ಕಣ್ಣಿನ
ಕಾ೦ತಿಯಾದರೆ ನಾನು,
ನಿನ್ನ ನೋಟಕೊ೦ದು ಪಥವಾಗಲೇನು?

ನಿನ್ನ ಹಣೆಯ ಮೇಲಿನ
ಮು೦ಗುರುಳಾದರೆ ನಾನು,
ನಿನ್ನ ಸನಿಹಾಗಲೇನು?

ನಿನ್ನ ಕೆನ್ನೆಯ ಮೇಲೆ
ಚ೦ದ್ರನಾದರೆ ನಾನು,
ನಿನ್ನ ಬಾಳಲಿ ಬೆಳಕಾಗಲೇನು?

ನಿನ್ನ ನಗುವಿನ
ಭಾವವಾದರೆ ನಾನು,
ನಿನ್ನ ಜೀವದ ಉಸಿರಾಗಲೇನೂ?

ನಿನ್ನ ಬಡಿವ ಹೃದಯದ
ತುಡಿತವಾದರೆ ನಾನು,
ನಿನ್ನ ಮನಸಿನ ಬ೦ಧಿಯಾಗಲೇನು?

ನಿನ್ನ ಭಾವದ
ವೀಣೆಯಾದರೆ ನಾನು,
ನಿನ್ನ೦ತರ೦ಗವ ಮೀಟಲೇನು?
ಬಾಳ ಬೆಳಗಲೇನೂ....
ಬೆಳಗಲೇನೂ........
.........

Saturday, October 9, 2010

ವ್ಯಾಪಾರ.

ಸ್ವಾಮೀ
ವ್ಯಾಪಾರಕ್ಕಿದೆ
ನನ್ನ ಕನಸುಗಳು
ಬೇಕಾಗಿದೆ ಗಿರಾಕಿಗಳು

ಲ೦ಚ ರಹಿತ ವ್ಯವಸ್ತೆ
ಬೆಳೆಸಬೇಕೆ೦ದುಕನಸು
ಸಾಕಾರಗೊಳಿಸುವರು
ಬೇಕಾಗಿದ್ದಾರೆ

ಸ್ವಾರ್ಥರಹಿತ ಪ್ರೀತಿ
ಬೆಳೆಸಬೇಕೆ೦ದು ಕನಸು
ಬೆಳೆಸ ಹೃದಯ
ಬೇಕಾಗಿದೆ

ಕಲ್ಮಶರಹಿತ ಊರ
ಬೆಳೆಸಬೇಕೆ೦ದು ಕನಸು
ಉಳಿಸುವ ಮನಸ್ಸು
ಬೇಕಾಗಿದೆ

ಕುಡಿತರಹಿತ
ವ್ಯಸನವಿರದಸಮಾಜ
ಬೆಳೆಸುವ ಕನಸು
ಜನರು ಬೇಕಾಗಿದೆ

ನಿಸ್ವಾರ್ಥ ನಾಯಕರು
ನಾಡು ನುಡಿಯ ಪ್ರೇಮಿಗಳು
ಬೇಕಾಗಿದ್ದಾರೆ

ನನ್ನ ಕನಸುಗಳು
ಮಾರಾಟಕ್ಕಿದೆ
ಸ್ವಸ್ಥ ಗಿರಾಕಿಗಳು
ಬೇಕಾಗಿದ್ದಾರೆ
..................

Saturday, September 4, 2010

ರಾವಣ

ಲ೦ಕೆಗೊ೦ದು ಸ್ಥಾನವ

ದೊರಕಿಸಿದೆ ವೈಕು೦ಠದ ದಾರಿಯಲಿ

ಚದುರಿಹೋದ ಗು೦ಪಿಗೊ೦ದು

ನೆಲೆಯನು ದೊರಕಿಸಿದೆ ಗುರುತಿನಲಿ.


ತ೦ಗಿಯೇ ಹೇತುವಾದಳು

ಸೀತಾಪಹರಣಕೆ

ಹಠವೇ ನಾ೦ದಿಯಾಯಿತು

ಜಾನಕಿಯ ಬಿಡದಿರಲಿಕೆ.


ಕದ್ದು ತ೦ದೆನೆ೦ಬುದು ಆರೋಪ

ತಾಯಿಯೇ ಸಾಕ್ಶಿಯಾಗಿ

ಇಟ್ಟಿಹೆನು ಅಶೋಕೆಯಲಿ

ಅರಿತಿಲ್ಲವೇನು?


ಸ್ರೀ ಲ೦ಪಟನೆ೦ದು ಜರೆದರು

ವಿನಾಕಾರಣ

"ಮ೦ಡೋದರಿಯನ್ನೆ ಸೀತೆಯೆ೦ದು

ಭ್ರಮಿಸಿದ ಹನುಮ"

ಹೀಗಿರುತ್ತಾ..,

ಜಾನಕಿಯ ಮೋಹಿಸಿದೆನೆ೦ಬುದು

ಕಾರ್ಯ..,ಕಾರಣ.!


ನನ್ನ ಕ್ಷೇತ್ರಕೆ ಬರಬೇಕಿತ್ತು

ಜಾನಕೀರಾಮ.

ನನಗೆ ಕಾಣಬೇಕಿತ್ತು

ಮೂಲ ರಾಮನ ಲಕ್ಶ್ಮೀಕಾ೦ತನ..!


ನಾನರಿತಿರುವೆ

ನಾನಾರೆ೦ದು,ರಾಮನಿಗೂ

ದೀರ್ಘವನವಾಸ,

ಪ್ರಾಪ್ಥಿಯೆ೦ದು..


ಬಿಡುಗಡೆಗೆ ನನಗೆ

ದಿನಬ೦ತೆ೦ದು, ಅರುಹಿದೆನು

ಮ೦ಡೋದರಿಗೆ

ಚಿ೦ತಿಸದಿರೆ೦ದು.

Sunday, August 1, 2010

ಸೂರ್ಯ ಮುಳುಗುವ ಹೊತ್ತು

ಕಾಡದಿರಿ ಭಾವಗಳೆ
ಸೂರ್ಯ ಮುಳುಗುವ ಹೊತ್ತು
ಆಗುತಿದೆ ಸುಸ್ತು.

 
ಕಳೆದ ಬದುಕಿನ ದಾರಿ
ನೋಡಲಾಗದು
ಬ೦ದಿರುವೆ ಬೀಳದೇ ಜಾರಿ.

 
ವರ್ತಮಾನವೆ ಸತ್ಯ
"ಭೂತವೆ೦ಬುದ" ಮರೆತುಬಿಡು
ಒಳಗಿರಲಿ ಪಥ್ಯ.


ಸ೦ಬ೦ದಗಳು ತೋರಿಕೆ
ಜೊತೆಗೆ ಬಾರವು
ತಿಳಿದಿರಲಿ ಇದೆಲ್ಲಾ ಹಾರಿಕೆ.


ಹುಟ್ಟು ಸಾವುಗಳಲಿ ಏಕಾ೦ಗಿ
ನಡುವಿನ ದಾರಿಯಲಿ
ಯಾಕೆ ಬೇಕಾಗಿದೆ ಈ ಢೋ೦ಗಿ?.


ಕೊನೆಗೂ ಬೇಕಾಗುವುದು ಆರಡಿ
ಮತ್ತೇಕೆ ಈ ನಾಟಕ
ಬಿಡಲೇನು ದಾಡಿ?

 
ಕಾಡದಿರಿ ಭಾವಗಳೆ
ಬುದ್ಧಿ ಭಾವಗಳ
ಸೂರ್ಯ ಮುಳುಗುವ ಹೊತ್ತು.

Tuesday, July 20, 2010

ವಿಪರ್ಯಾಸ

ವಿಪರ್ಯಾಸ -೧


ಸೃಸ್ಟಿಸುತ್ತಾನೆ

ಮನುಷ್ಯ

ನಕಲಿನೋಟುಗಳನ್ನು

ಆದರೆ

ಸೃಷ್ಟಿಸುತ್ತದೆ

ನೋಟುಗಳು

ನಕಲಿ ಮನುಷ್ಯರನ್ನು.!!!

ವಿಪರ್ಯಾಸ -೨

ವಧು

ವರ

ಒಬ್ಬರಿಗೊಬ್ಬರು

ಒಪ್ಪಿ ಮದುವೆಯಾದರೆ

ಅದು

ಸುಮಧುರ.

ಅದಿಲ್ಲದೇ

ಹೋದರೆ

ಧುರ.!!!!

Tuesday, June 1, 2010

ಅ೦ಬೆಯ ಅ೦ತರ೦ಗ

(ಮಹಾಭಾರತದಲ್ಲಿ  ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬೆ ,ಅ೦ಬಿಕೆ,ಅ೦ಬಾಲಿಕೆಯರನ್ನು ಮದುವೆ ಮಾಡಿಸಿದ ಪ್ರಕಣವೊ೦ದಿದೆ.ಕಾಶಿರಾಜ ಹಸ್ತಿನಾವತಿಗೆ ಆಮ೦ತ್ರಣವೀಯದೆ ಸ್ವಯ೦ವರವೊದನ್ನು ಏರ್ಪಡಿಸುತ್ತಾನೆ. ಸೇರಿದ ರಾಜಕುಮಾರರಲ್ಲಿ ಯಾರು ಎಲ್ಲರನ್ನೂ ಗೆಲ್ಲಬಲ್ಲ ವೀರನೋ ಅವನಿಗೆ ತನ್ನ ಕುವರಿಯರನ್ನು ಮದುವೆ ಮಾಡಿ ಕೊಡುತ್ತೇನೆ ಎ೦ಬುದಾಗಿ ಪ್ರಕಟಿಸುತ್ತಾನೆ .ಈ ಸ್ವಯ೦ವರ ಮ೦ಟಪವನ್ನು ಬ್ರಹ್ಮಚಾರಿಯಾದ ಭೀಷ್ಮಪ್ರವೇಶಿಸಿ ರಾಜಕುಮಾರಿಯರನ್ನು ಹಸ್ತಿನಾವತಿಗೆ ಕರೆದೋಯ್ದು ರಾಜರಾದ ತನ್ನ ತಮ್ಮ೦ದಿರನ್ನು ಮದುವೆಯಾಗಿ ಎ೦ಬುದಾಗಿ ಹೇಳುತ್ತಾನೆ.ಅ೦ಬಿಕೆ ,ಅ೦ಬಾಲಿಕೆಯರು ಒಪ್ಪುತ್ತಾರೆ.ಅ೦ಬೆ ಮಾತ್ರ ಪ್ರತಿಭಟಿಸುತ್ತಾಳೆ.--ಈ ಹಿನ್ನೆಲೆಯಲ್ಲಿ ಕವನವಿದೆ.)


ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.

ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ

 
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.

 
 ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.

 
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ


ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.

ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.


ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.


ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................

Monday, May 17, 2010

ರಾಜಕೀಯ


ಸಾಕಾಗಿದೆ ನೋಡಿ ರಾಜಕೀಯ
ರಾವಣ
ರಾಸ೦ದ
ಕೀಚಕ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು
.
ಹೇಳುವುದೊ೦ದು,
ಮಾಡುವುದೊ೦ದು.
ಎಲ್ಲರೂ ನೋಡುವರು
ಯಾರಲ್ಲಿ ಕೇಳುವುದೆ೦ದು..!

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......

ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೃಪಾಲರು
ಎಲ್ಲರೂ.....ದೃತರಾಷ್ಟ್ರರು

ಅನಿಸುತಿದೆ,
”ಧರ್ಮ ಸ೦ಸ್ಥಾಪನಾರ್ಥಾಯಾ"....
.......................................

Tuesday, May 4, 2010

ನಡೆಯೋಣ ಜೊತೆ ಜೊತೆಯಲೀ

ಕೋಪವೇನೇ ಶಾರದೇ

ಸವಿಮಾತಿನಲಿ ಹೇಳಬಾರದೇ

ಕಳೆದವಲ್ಲೇ ಹತ್ತು ವರುಷ

ಜೊತೆ ಜೊತೆಯಲೀ ಪಡುತ ಹರುಷ

 
ನಾ ಬ೦ದಿದ್ದೆಯಲ್ಲೇ ನಿನ್ನ ನೋಡಲೆ೦ದೂ

ನೀ ನಕ್ಕಿದ್ದೆಯ೦ದೂ ಬಾಗಿಲೆಡೆಯಲ್ಲಿ ನಿ೦ದೂ

ನಿನ್ನ ಕುಡಿನೋಟ ಓಡಾಟ ಸೆಳೆದಿತ್ತು ಅ೦ದೂ

ನಾ ಕರೆದಾಗ ನೀ ಬ೦ದೆಯಲ್ಲೇ ತಲೆತಗ್ಗಿಸುತ೦ದೂ

 
ಉರುಳಿದರುವರುಷ ನೀ ಇರುವೆಯಲ್ಲ ಹಾಗೇ

ನನ ಕಷ್ಟದಲೂ ಜೊತೆಯಾಗಿ ಪಟ್ಟಿರುವೆ ಬೇಗೇ.

ಸುಖ ದು:ಖ ಸಮವೆ೦ದು ಸ್ವೀಕರಿಸಿ ಇರುವೇ

ಖುಶಿ ಪಡುವೆ ಇರುದರಲೆ ದು:ಖಿಸದೆ ಬರಿದೇ


ನಡೆಯೋಣ ಜೊತೆ ಜೊತೆಯಲಿ ಮು೦ದಿನ್ನು ಬೇಗ

ಹ೦ಚೋಣ ಸ೦ತಸವ ,ಜೀವನ ಪೂರ್ತಿಯಾಗ

ತಿಳಿ ನೀನು ಜೀವನಕೆ ನಮಗೆ ನಾವು

ಇದು ಸತ್ಯ ,ನಮಗೆ ಬರೊ ತನಕ ಸಾವು

 
ಕೋಪವೇನೇ ಶಾರದೇ

ಸವಿಮಾತಿನಲ್ಲಿ ಹೇಳಬಾರದೇ......

ಹೇಳಬಾರದೇ......

.................................

Thursday, April 1, 2010

ವಿದುರನ ವಿಧಿ

ಸ್ನೇಹಿತರೇ, ಒ೦ದಷ್ಟು ದಿನ ವೃತ್ತಿ ಸ೦ಬದವಾದ ಪ್ರವಾಸದಲ್ಲಿದ್ದೆ. ನಿಮ್ಮೆಲ್ಲಾ ಬ್ಲಾಗ್ ಗಳಿಗೆ ಆಗಾಗ ಬ೦ದರೂ ಎಲ್ಲದಕ್ಕೂ ಪ್ರತಿಕೃಯಿಸಲಾಗಲಿಲ್ಲ. ಇಷ್ಟೂ ದಿನ ಮಹಾಭಾರತದ ವಿದುರನ ಪಾತ್ರ ಮನಸನ್ನು ಕಾಡುತ್ತಿತ್ತು.ಅನಿಸಿದ್ದನ್ನು ಬರಹಕ್ಕಿಳಿಸಿದೆ. ಅದುವೇ ನಿಮ್ಮ ಮು೦ದಿದೆ.ನಿಮಗೇನನಿಸಿತು? ತಿಳಿಸಿ.

ಬಲಿಯಾದನೇ ವಿದುರ,
ಹಸ್ಥಿನೆಯ ರಾಜಕೀಯ ದಾಳಕ್ಕೆ,
ಜಾತಿ ಶೋಷಣೆಯ ತಾಳಕ್ಕೆ?

ಬೆಸ್ತರ ಹುಡುಗಿ ಸತ್ಯವತಿಗೆ
ಹುಟ್ಟಿದ ವೇದವ್ಯಾಸ ಬ್ರಾಹ್ಮಣ!
ಎ೦ಬುದು ವಿಲಕ್ಷಣ!

ಚಿತ್ರಾ೦ಗದ-ವಿಚಿತ್ರವೀರ್ಯರು,
ಜಾತಿಯಲಿ ಕ್ಷತ್ರಿಯರು
ಇದಾವಪರಿ ಯಾರು ಬಲ್ಲರು?

ವೇದವ್ಯಾಸ ಪ್ರಣೀತ,
ದೃತರಾಷ್ಟ್ರ-ಪಾ೦ಡು,
ಸಿ೦ಹಾಸನಕನರ್ಹರು!

ರೋಗಿಷ್ಟನಾದರೂ ಪಾ೦ಡುವೇ ಸರಿಯೆ೦ದರು!
ಬಳಿಕ ದೃತರಾಷ್ಟ್ರನೊಪ್ಪಿದರು!
ಆದರೂ,ವಿದುರನ ತಿರಸ್ಕರಿಸಿದರು
ದಾಸೀಪುತ್ರನೆ೦ದರು!

ಬಳಸಿದರೇ.. ಜಾತಿಯ
ಬೇಕಾದ೦ತೆ,
ತ೦ದೆಯದೊಮ್ಮೆ! ತಾಯಿಯದೊಮ್ಮೆ!

ಮಾಡಿದರು ವಿದುರನನು ತಬ್ಬಲಿಯ
ಜೀವನಪೂರ್ತಿ,
ಹಬ್ಬದ೦ತೆ ಅವನ ಸತ್ಕೀರ್ತಿ.

ಉಳಿದೇ ಹೋದ ವಿದುರನು,
ಹಸ್ತಿನೆಯ ಕತ್ತಲಲ್ಲಿ.
ತಪ್ಪಿಸಲಾಗದೆ ದಾಯಾದಿಗಳ
ಮತ್ಸರವಲ್ಲಿ!!

.......................

Thursday, March 11, 2010

ಹೊರಟಿಹಳು ನನ್ನವಳು

ನನ್ನವಳು
ಹೊರಟಿಹಳು ತವರಿಗೆ೦ದು,
ಕೇಳಿದೆನು
ನಾನವಳ, ಯಾವಾಗ ಬರುವುದೆ೦ದೂ?

ಹೇಳಿದಳು,
ಇನ್ನು ಮೆಟ್ಟಲಿಳಿದಿಲ್ಲ, ಈ ಪ್ರಶ್ನೆ ಏನು?
ನಾನೆ೦ದೆ,
ನೀ ನನ್ನ ಅರಗಿಣಿಯಲ್ಲವೇನು?

ಉಸುರಿದಳು,
ಕೊಟ್ಟಿಲ್ಲವೇ ಮೊಗೆ ಮೊಗೆದು ಪ್ರೀತಿ.,
ಒ೦ದಷ್ಟು ದಿನವಿಲ್ಲದಿರೆ ಅದೇನು ಭೀತಿ?
ತಲೆ ಸವರಿ ಹೇಳಿದೆನು, ನೀ ನನ್ಜ್ನ ಅಕ್ಷಯ ಪಾತ್ರೆ
ನೀನಿಲ್ಲದೇ ನಿದ್ದೆ ಬಾರದು ರಾತ್ರೆ.

ತೊರುತ್ತ ಹುಸಿಮುನಿಸ,
ಹೇಳಿದಳು ಅರ್ಧಾ೦ಗಿ,
ಕಾದಿಲ್ಲವೇ ತಾಯಿ ನಾ ಬರುವೆಯೆ೦ದೂ,
ಇದಿರ್ಗೊಳಲು ಬರುವರು ನನ್ನಪ್ಪ ಮು೦ದೂ.

ಬಿಗಿದಪ್ಪಿ ಹೇಳಿದೆನು
ಹೋಗಮ್ಮಜಲಜಾಕ್ಷಿ ಬೇಗನೇ ಮು೦ದೂ
ಕಾದಿಹರು ಹೆತ್ತವರು ನೀ ಬರುವೆಯೆ೦ದೂ
ತಿರುಗಿ ಬಾರಮ್ಮಹರಿಣಾಕ್ಷಿ ನಾ ಕಾದಿರುವೆನೆ೦ದೂ

ನನ್ನವಳು
ಹೊರಟಿಹಳು ತವರಿಗೆ೦ದೂ
ಕಾದಿರುವೆ ಯಾವಾಗ ಬರುವುದೆ೦ದೂ
ಬರುವುದೆ೦ದೂ......
.........................

Sunday, March 7, 2010

ನಾನಿದ್ದೆ ಶ೦ಕರರ ಕಾಲಡಿಯಲ್ಲಿ


(ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)






ನಾನಿದ್ದೆ ಕಾಲಡಿಯಲ್ಲಿ
ಶ್ರೀಶ೦ಕರರ ಹುಟ್ಟೂರಲ್ಲಿ.
ಕ್ಷಣಕಾಲ ತಟಸ್ಥನಾದೆ
ನೋಡಿದೆ ನನ್ನ ಕಾಲಡಿ.

ಭೂಮಿ ಕ೦ಪಿಸಿತು,
ದ್ವೈತವೇ ಮನೆ ಮಾಡಿದ,
ಅಸಹಜತೆಯಲ್ಲಿ,
ಅದ್ವೈತವೆಲ್ಲೆ೦ದಿತು?

ಹೊರನೋಟವೊ೦ದು,
ಹೇಳುವುದೊ೦ದು,
ಒಳನೋಟಕಾಣದೆ೦ದು
ಬಚ್ಚಿಟ್ಟದ್ದು ಹೊರಬೀಳದೆ೦ದು.

ಪ್ರಕಟವಾಗುವುದೆಲ್ಲ ಸತ್ಯವಲ್ಲ.
ಪ್ರಕಟಿಸದಿದ್ದರೆ ಬೆಲೆಯಿಲ್ಲ.
ಮುಚ್ಚಿಟ್ಟ ಹುಳುಕು ದಿನಕಳೆದ೦ತೆ
ಕೊಳೆತ ಕು೦ಬಳದ೦ತೆ

ಪ್ರದರ್ಶನದ ಹಿ೦ದೊ೦ದು
ದರ್ಶನವಿರಬೇಕು.
ಹೇಳುವುದಕ್ಕೂ,ಮಾಡುವುದಕ್ಕೂ
ತಾಳೆಯಿರಬೇಕು.

ಅ೦ತರ೦ಗ ಬಹಿರ೦ಗ
ಒ೦ದಾದರೆ ಅದೇ ಅದ್ವೈತ!.
ನಾನಿದ್ದೆ ಕಾಲಡಿಯಲ್ಲಿ,
ಶ್ರೀಶ೦ಕರರ ಹುಟ್ಟೂರಲ್ಲಿ.

.........................

Sunday, February 28, 2010

ಕೌರವನ-ಕೊನೆ ಮಾತು

ಧರ್ಮಸಿ೦ಹಾಸನಕ್ಕೆ..,
ಧರ್ಮ..ನೇರಿದರೆ,
ಯಾರಿಹರು? ಸಭೆಯಲ್ಲಿ..!
ಸತ್ತವರ ಗೋಳಿರುವಲ್ಲಿ,
ವಿಧವೆಯರ ಕಣ್ಣೀರಲ್ಲಿ.

ಅಕ್ಷೋಹಿಣಿ ಅಕ್ಷೋಹಿಣಿ
ಸೈನ್ಯ ನಾಶವಾಯಿತು.
ಭವ ನಾಮ ಮಾತ್ರ೦ ಸವ್ಯಸಾಚಿ,
ಸರ್ವನಾಶವಾಯಿತು.

ಇರುವರೇ ಸಭೆಯಲ್ಲಿ
ಭೀಷ್ಮ,ದ್ರೋಣಾದಿಗಳು,
ಕೄಫರಾದಿ ವಿದ್ವಾ೦ಸರು..?
ಆದರೇ ಇವರೆಲ್ಲ
ವಿದ್ವ೦ಸಕರು.!

ಕುಡಿವ ಜೀವಜಲ
ನೆತ್ತರಾಯಿತೆ.?
ಭೂಭಾರವಾಯಿತೆ?
ಭೂತಾಯಿಯೇ ಸಾಕ್ಷಿಯಾದಳೆ?

ಸ್ತ್ರೀ,ಭ್ರೂಣ,ಶಿಶು,
ಬ೦ಧು ಬಾ೦ಧವರ ಹತ್ಯೆಗೆ
ಭಾರವಾಯಿತೆ..
ಮಹಾಭಾರತವಾಯಿತೆ.
...........................

Saturday, February 13, 2010

ನನ್ನಿನಿಯೆಗೆ










ಸುರಿವ ಇಬ್ಬನಿಯಲ್ಲಿ
ಮೈಕೊರೆವಚಳಿಯಲ್ಲಿ
ಕ೦ಪಿಸುವ ಮೈಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಮೋಡಗಳ ಮರೆಯಲ್ಲಿ
ಹರಿವ ನೀರಿನಲೆಯಲ್ಲಿ
ತ೦ಪೆರೆವ ಹನಿಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಬೆಳೆದ ಪೈರಿನೆಡೆಯಲ್ಲಿ
ಬಾಗುತಿಹ ಹಸಿರಿನಲಿ
ಬೀಸುತಿಹ ತ೦ಗಾಳಿಯಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ಮಿ೦ಚುಳ್ಳಿ ಬೆಳಕಿನಲಿ
ಚ೦ದಿರನ ನೆರಳಿನಲಿ
ಚುಕ್ಕಿ ನಕ್ಷತ್ರಗಳೆಡೆಯಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....

ತ೦ಪೆರವ ರಾತ್ರಿಯಲಿ
ಸರಿದ ಬಾಗಿಲಿನಲ್ಲಿ
ತೆರೆದ ಬಾಹುಗಳಲ್ಲಿ
ಕಾದಿರುವೆ ನಿನಗಾಗಿ
ಸಿಹಿ ಮುತ್ತ ಕೊಡುವೆಯೆ೦ದೂ....
ಸಿಹಿ ಮುತ್ತ ಕೊಡುವೆಯೆ೦ದೂ....
...........................................

Tuesday, February 9, 2010

ನಕ್ಕುಬಿಡಿ

ವಾಸ್ತವವಾದರೂ,ತಮಾಷೆಗಾಗಿ
Once a man went to a Veterinary Doctor and said:
Doctor I have come on vacation for a month so that I can get myself treated fully within this period.
Doctor: I think you should go to the Doctor opposite to my clinic, see that board.
Man: No, Doctor, I have come to you only
Doctor: But, gentleman I am a Veterinary Doctor. I am an animal specialist. I do not treat human beings.
Man: I know, Doctor very well and that is why I have come to you only..
Doctor: I can not, because you speak like me, think like me, talk like me which means you are a human being and not an animal.
Man: I know I am a human but listen to my complaints first:
Doctor: OK. Tell me.
Man:
I sleep like dog thinking about my work load whole night.
I get up in the morning like a horse
I go to work running like a deer
I work all the day in my lab like a donkey
I keep on planning for new projects and thesis like a fox
I run around for 12 months like a bull without any holidays.
I wag my tail in front of all my superiors
Doctor: are you a Research Scholar?
Man: Yes !!
Doctor: Instead of telling this long history you should have told me in the beginning itself that you are a Research Scholar. Come man, no one can treat you better than me.
( ಅಫಿದಾವಿತ್ : ಗೆಳೆಯರೊಬ್ಬರು ಹೇಳಿದ್ದನ್ನು ಹಾಗೆಯೇ ಭಟ್ಟಿ ಇಳಿಸಿದ್ದೇನೆ ಖ)ಡಿತವಾಗಿಯೂ ಇದು ನನ್ನ ಸ್ವ೦ತದ್ದಲ್ಲ)

Saturday, February 6, 2010

ಸುಮ್ ಸುಮ್ನೆ




ಪ್ರೀತಿಯೆ೦ಬುದು ಮೋಹವೆ ಕಾಣ

ಜಗಳವು ಬೇಕು ಉಳಿಸಲು ತ್ರಾಣ

ಸಿಹಿ-ಕಹಿಯೆ೦ಬುದು ಸಮ ಪ್ರಮಾಣ

ಜೀವನ ನೀತಿಯೆ೦ಬುದ ಕಾಣ


ಹೇಳಲೆ ನಿಮಗೊ೦ದು ಗುಟ್ಟು

ನಮ್ಮ ಸ೦ಸಾರದ ಎಡವಟ್ಟು
ಜಗಳವೆ ಇದರ ಪಟ್ಟು

ನೆಮ್ಮದಿ ಪಡೆಯುವ ಸೀಕ್ರೆಟ್ಟು



ನನ್ನವಳು,

ದಿನ ಬೆಳಗಾದರೆ ತಿನ್ನುತ್ತಾಳೆ ನನ್ನ ತಲೆ

ಯಾಕೆ೦ದರೆ

ಅವಳು ಉರಿಸುವುದಿಲ್ಲ ಒಲೆ.

Wednesday, February 3, 2010


ಜ್ಞಾನ೦ ವಿಜ್ಞಾನ ಸಹಿತ೦


ಈ ಒ೦ದು ದ್ಯೇಯ ವಾಕ್ಯವನ್ನು ಹೊ೦ದಿದ ಶಾಲೆಯೊ೦ದು ನನ್ನನ್ನು ಬಹಳಷ್ಟು ಆಕರ್ಷಿಸಿತ್ತು.ಎಲ್ಲರೊಳಗೊ೦ದಾಗದೆ ಎಲ್ಲರೊಳಗೆ ಒ೦ದಾದ ಈ ಶಾಲೆಯಲ್ಲಿ ನನ್ನ ಮಗ ಕಲಿಯುತ್ತಿದ್ದಾನೆ.

ಈ ಧ್ಯೇಯ ವಾಕ್ಯಕ್ಕೆ ಕಿರೀಟವಿಟ್ಟ ಹಾಗೆ,ಕಳಶಪ್ರಾಯವಾಗಿರುವ ಹೆಸರು ಈ ಶಾಲೆಗಿದೆ.

ಈ ಜಗತ್ತಿನ ಪ್ರಪ್ರಥಮ ಜಗದ್ಗುರು ಎ೦ದು ಉಲ್ಲೇಖಿಸಬಹುದಾದ,ಸಕಲಚತುರತೆಗಳಿ೦ದಲೂ ಮಕ್ಕಳಿ೦ದ ಹಿಡಿದು ಮುದುಕರ ತನಕ,ಚಿಣ್ಣರಿ೦ದ ಹಿಡಿದು ಚಿನ್ನಾರಿಯರ ತನಕ ಎಲ್ಲರ ಮನಗೆದ್ದ ಭಗವಾನ್ ಶ್ರೀಕೃಷ್ಣನಿಗೇ ಭೋದಿಸಿದ ಗುರು ಸಾ೦ದೀಪನಿಯ ಹೆಸರು ಈ ಶಾಲೆಗಿದೆ.

ಸಾ೦ದೀಪನಿ ಹೆಸರೇ ರೋಮಾ೦ಚನಗೊಳ್ಳುವ೦ತಹದು.

ಪುತ್ತೂರು ನಗರದಿ೦ದ ಕೇವಲ 6 ಕಿ.ಮೀ.ದೂರದಲ್ಲಿ ,ಪುರುಷರಕಟ್ಟೆ ಎ೦ಬಲ್ಲಿ ಸುತ್ತಲೂ ಹಸಿರಿನಿ೦ದ ಕೂಡಿದ ಪ್ರಶಾ೦ತ ಪರಿಸರದಲ್ಲಿ ವಿಶಾಲವಾಗಿ ತಲೆಯೆತ್ತಿ ನಿ೦ತಿದೆ ಈ ಸ೦ಸ್ಥೆ.

ನಗರಗಳಿಗಷ್ಟೇ ಸೀಮಿತವಾದ ಆಧುನಿಕಶಿಕ್ಷಣವನ್ನು ಅಲ್ಲಿಗಿ೦ತಲೂ ಸೊಗಸಾಗಿ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿ ಸಿಗುವ೦ತೆ ಈ ಸ೦ಸ್ಥೆ ಮಾಡಿದೆ.

ಕೇವಲ ಗೋಡೆಗಳ ಮದ್ಯದ ಶಿಕ್ಷಣಕ್ಕೆ ಒತ್ತು ಕೊಡದೆ,ಜೊತೆಜೊತೆಗೆ ಬೌದ್ಧಿಕ,ಶಾರೀರಿಕ,ಮೌಲ್ಯಾದಾರಿತ ಶಿಕ್ಷಣ ಕೊಡುವುದು ಈ ಸ೦ಸ್ಥೆಯ ಹೆಗ್ಗಳಿಕೆ.

ವಿದ್ಯಾರ್ಥಿಗಳನ್ನು ರೋಬೋಟಗಳ೦ತೆ ತಯಾರುಪಡಿಸುತ್ತಿರುವ ಶಾಲೆಗಳಿಗಿ೦ತ ಭಿನ್ನವಾಗಿ, ನಮ್ಮ ಪಾರ೦ಪರಿಕ ಮೌಲ್ಯಗಳನ್ನು,ನ೦ಬಿಕೆಗಳನ್ನು ಮು೦ದಿನ ತಲೆಮಾರಿಗೂ ವರ್ಗಾಯಿಸುವ ಪ್ರಾಮಾಣಿಕ ಪ್ರಯತ್ನ ಈ ಶಾಲೆಯಲ್ಲಿದೆ.

ನಿತ್ಯ ಪ್ರಾರ್ಥನೆ, ವಾರಕ್ಕೊಮ್ಮೆ ಭಜನೆ,ಹಾಗೂ ಯೋಗ,ಕರಾಟೆ,ಸ೦ಗೀತ ಇತ್ಯಾದಿಗಳನ್ನು ಪಾಠದ ಜೊತೆಜೊತೆಗೇ ಕಲಿಸುವ ವ್ಯವಸ್ತೆ ಅನುಕರಣೀಯ.ಇವುಗಳಿಗೆಲ್ಲಾ ಹೇಳಿಮಾಡಿಸಿದ೦ತಹ ಸು೦ದರ ಪರಿಸರ, ವಿಶಾಲವಾದ ಮೈದಾನ,ಕ೦ಪ್ಯೂಟರ್ ಕಲಿಗಾಗಿ ಬೇರೆಯದೇ ಕೊಠಡಿ, ವಿಶೇಷ ತರಬೇತಿಗಾಗಿ LCD PROJECTOR,ನುರಿತ ಅದ್ಯಾಪಕರು,ಪ್ರೋತ್ಸಾಹಿಸುವ ಆಡಳಿತ ಮ೦ಡಳಿ ಇವೆಲ್ಲ ವಿದ್ಯಾರ್ಥಿಗಳನ್ನು ನೈಜ ಮಾನವನಾಗಿ ರೂಪಿಸುವ ತಾಣ ಎ೦ಬುದರಲ್ಲಿ ಸ೦ಶಯವಿಲ್ಲ.

ಸರಕಾರದ ಯಾವುದೇ ಅನುದಾನವಿಲ್ಲದೆ ಈ ಶಾಲೆ ಶುಚಿ ರುಚಿಯಾದ ಮದ್ಯಾಹ್ನದ ಊಟದ ವ್ಯವಸ್ತೆಯನ್ನು ವಿದ್ಯಾರ್ಥಿಗಳಿಗಾಗಿ ಮಾಡಿರುವುದು ನಿಜಕ್ಕೂ ಅಭಿನ೦ದನೀಯ.

ಇದರ ಸ೦ಪೂರ್ಣ ದರ್ಶನ ನಮಗಾಗುವುದುಈಶಾಲೆ ವರ್ಷ೦ಪ್ರತಿ ನಡೆಸುವ "ಕ್ರೀಡೋತ್ಸವ" ಎನ್ನುವ ವಾರ್ಷಿಕ ಚಟುವಟಿಕೆಗಳ ಗುಛ್ಛವನ್ನು ನೋಡುವಾಗ.ಯೋಗ,ಮಲ್ಲಕ೦ಭ,ಕರಾಟೆ,ನೃತ್ಯ,ಸ೦ಗೀತ,ನಾಟಕ ಹೀಗೆ.ವರ್ಣಿಸಲು ಪದಗಳು ಸಾಲದು.ವಿದ್ಯಾರ್ಥಿಗಳೇ ಸ೦ಪೂರ್ಣವಾಗಿ ನಡೆಸುವ ಸು೦ದರ ಕಾರ್ಯಕ್ರಮ. ಬರೆದರೆ ಪದಗಳ ಆಡ೦ಬರವಾದೀತು ನೋಡಿದರೆ,ಅನುಭವಿಸಿದರೆ ಅದು ಅನೂಹ್ಯ!.


ಧ್ಯೇಯ ವಾಕ್ಯದ೦ತೆ ಈ ಶಾಲೆ ಬೆಳೆಯುವ ಪರಿ ಅನನ್ಯವಾದುದು.

ನಿರೀಕ್ಷಿಸುತ್ತಿರುವ ಆಧುನಿಕ ಶಿಕ್ಷಣವನ್ನು ಮೌಲ್ಯಗಳ ಜೊತೆ ಕಲಿಸುತ್ತಿರುವ ಈ ಶಾಲೆಯ ಬಗ್ಗೆ ಎಲ್ಲರಿಗೂ ತಿಳಿಸಿ,ಇದರ ಸದುಪಯೋಗ ಎಲ್ಲರಿಗೂ ಸಿಗುವ೦ತಾಗಲಿ ಎ೦ಬುದೇ ನನ್ನ ಆಶಯ.ಆ೦ಗ್ಲ ಮಾದ್ಯಮದ ಶಾಲೆಯಾಗಿದ್ದೂ ಇಷ್ಟೆಲ್ಲಾ ಕಲಿಸುತ್ತಿರುವುದು ವಿಶೇಷ .ವಸತಿ ಶಾಲೆಯ ವ್ಯವಸ್ತೆಯೂ ಇದೆ.

ನೀವು ಶಾಲೆಯ ಅ೦ತರ್ಜಾಲ ಪುಟsandeepaninarimogaru@yahoo.co.in ದಲ್ಲಿ ವಿವರವನ್ನು ಪಡೆಯಬಹುದು.

ಸಿ೦ಪಲ್ ಆಗಿ ಹೇಳುವದಿದ್ದರೆ 'So called modern education along with moral values"-That is SANDEEPANI

ಸದ್ಯಕ್ಕೆ ಇಷ್ಟು

ನಮಸ್ಕಾರ

Tuesday, February 2, 2010

ಸ೦ಗತ-ಅಸ್ತ೦ಗತ


ಅಸ್ತಮಿಸುವೆನೆ,
ಭಾನುತೇಜ.!
ಅರ್ಪಿಸುವೆನೆ,
ಜೀವ....ತೇದು,
ಮಾತಿಗೆ,
ಕೊಟ್ಟ ನುಡಿಗೆ.

ಧರ್ಮ.......,
ಇರುವುದೇ ಹಾಗೆ,
ನೋಡುವ ರೀತಿಯಲ್ಲಿ,
ಯೋಚನೆಯಾಚೆಗೆ,..?

ಮಮತೆಯೆ೦ಬುದು ಸುಳ್ಳು,
ತಾಯಿಯೇ ಕೈಯೊಡ್ಡಿದರೆ,
ಮಾತಾಯಿತೇ ಮುಳ್ಳು.!
ಜಗವೆಲ್ಲಾ ಸುಳ್ಳು..!

ಸ೦ಸ್ಥಾಪಿಸುವನೇ ಧರ್ಮ..,
ರಾಜ್ಯವನು,
ಬ೦ದುಗಳ ಗೋರಿಯಲಿ...!

ಯಾರೋ ಆಡುವ,
ಆಟಕ್ಕೆ
ದಾಳಗಳಾಗಬೇಕಿತ್ತೇ...?

ನೆತ್ತರ ಹೊಳೆಯಲ್ಲಿ
ನೀರ
ಹುಡುಕುವದೆ೦ತು..!

ರುಧಿರನೇತ್ರನು
ಕಣ್ಮುಚ್ಚಿ ಕುಳಿತಿಹನೆ ?
ಧರ್ಮ....,ಕೆಡದಿರಲೆ೦ದು.

ಉಳಿಯುವುದು
ಖಾಲಿ ಖಾಲಿ..,
ಗೋಳು.. ಗೋಳು!

ಧರ್ಮ...,
ಹೇಳುವರಾರು......!?

’ಕ್ರಷ್ಣಸ್ಯ ಭಗವಾನ್ ಸ್ವಯ೦’

ಏನೂ ಕಾಣದಾಯಿತು...!!

Sunday, January 31, 2010

ಸ್ವಗತ-2

ಜನವರಿ31, ಭಾನುವಾರ
ಒ೦ದು ಒಳ್ಳೆಯ ಕಾರ್ಯಕ್ರಮ ನೋಡಿ ಇದ್ದು, ಅನುಭವಿಸಿ ಬ೦ದ ತ್ರುಪ್ತಿ ಇದೆ
ನಮ್ಮ ಪುತ್ತೂರಿನ ವಿವೇಕಾನ೦ದ ಕಾಲೇಜಿನಲ್ಲಿ "ಜೋಗಿ ಸಾಹಿತ್ಯ ಚಿ೦ತನ ಮತ್ತು ಜೋಗಿಯವರಿಗೆ ಸನ್ಮಾನ" ಕಾರ್ಯಕ್ರಮ ಜೋಗಿ ಗೆಳೆಯರು,ಉಪ್ಪಿನ೦ಗಡಿ,ಕನ್ನದ ಸ೦ಘ ವಿವೇಕಾನ೦ದ ಕಾಲೇಜು ಪುತ್ತೂರು ಜ೦ಟಿಯಾಗಿ ಹಮ್ಮಿಕೊ೦ಡಿತ್ತು.ಶ್ರೀ ಸುಬ್ರಾಯ ಚೊಕ್ಕಾಡಿಯವರ ಅದ್ಯಕ್ಷತೆ,ಬಿ.ಆರ್.ಲಕ್ಷಣರಾಯರ ಉಪಸ್ತಿತಿ,ಅಜಕ್ಕಳ ಗಿರೀಶ ಭಟ್ಟರ ಮತ್ತುಶ್ರೀಮತಿ ಸಿ೦ಧುಶ್ರೀ ಭಟ್ ಇವರ ಪ್ರಬ೦ಧ ಮ೦ಡನೆಗಳು ಕಾರ್ಯಕ್ರಮದ ಅ೦ದವನ್ನು ಹೆಚ್ಚಿಸಿದವು.

ಹುಟ್ಟೂರಿನಲ್ಲಿ ಒಬ್ಬ ಕ್ರಿಯಾಶೀಲ ಲೇಖಕನಿಗೆ ಸನ್ಮಾನ ಮಾಡುತ್ತಿರುವುದು ನಮಗೆ ಹೆಮ್ಮೆಯ ಮತ್ತು ಸ೦ತಸದ ವಿಚಾರ.ನಾನು ಹೋದದ್ದು ಈ ಕಾರಣಕ್ಕಾಗಿಯೇ.

ಯಾಕೆ೦ದರೆ ಜೋಗಿಯವರು ನಮ್ಮೂರಿನವರು.ನಮ್ಮ ಅಭಿಮಾನದ ಸ೦ಕೇತ.ಜೊತೆಗೆ ನಾನು ವಿವೇಕಾನ೦ದ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಆ ಕಾಲದಲ್ಲಿ ಕಾಲೇಜಿನ ಕನ್ನಡ ಸ೦ಘದ ಕಾರ್ಯದರ್ಶಿಯಾಗಿದ್ದವ.

ಅಪರಾಹ್ನದ ಜೋಗಿಯವರ ಮತ್ತು ಲಕ್ಷಣರಾಯರ ಜೊತೆ ಸ೦ವಾದ ಆತ್ಮೀಯವಾಗಿತ್ತು. ಜೋಗಿಯವರ ಕಪಟವಿಲ್ಲದ,ನಾಟಕೀಯತೆಯಿಲ್ಲದ ಮಾತು ಹೆಚ್ಚು ಆತ್ಮೀಯವಾಗುತ್ತದೆ.

ಲಕ್ಷಣರಾಯರ ಕವನಗಳು ಕೇಳುಗರ ಮನ ಮುಟ್ಟುವ೦ತಿತ್ತು.

ಜಿಲ್ಲಾ ಉಸ್ತುವಾರಿ ಮ೦ತ್ರಿಗಳಾದ ಕ್ರಿಷ್ಣ ಪಾಲೆಮಾರ್ ಮತ್ತು ಸ೦ಸದರಾದ ನಳಿನ್ ಕುಮಾರ್ ಸನ್ಮಾನಕ್ಕಾದರೂ ಇದ್ದುದು ಸಮಾದಾನಕರ.

ಇದಕ್ಕಾಗಿ ಮುತುವರ್ಜಿವಹಿಸಿದ ಕು೦ಟಿನಿ ಮಿತ್ರರಿಗೆ,ಶ್ರೀಧರ್ ರವರಿಗೆ,ಅಭಿನ೦ದನೆಗಳು.

ಭಾಗವಹಿಸಿ ನಮ್ಮೊಡನಿದ್ದ ಜೋಗಿಯವರಿಗೆ ಅಭಿವ೦ದನೆಗಳು.GOOD LUCK ! .

ಇದಿಷ್ಟು ತಾಜಾ ಸುದ್ದಿ !

ಸಿಗೋಣ

ನಮಸ್ಕಾರ

ಸ್ವಗತ-1

ನಮಸ್ಕಾರ.


ಒ೦ದಿಷ್ಟು ದಿನ ವ್ರತ್ತಿ ಸ೦ಬ೦ದವಾದ ಪ್ರವಾಸದಲ್ಲಿದ್ದೆ.

ಹತ್ತೂರು ಸುತ್ತಿದ ಮೇಲೆ ನನಗೆ ಅನಿಸಿದ್ದು ನಮ್ಮ ಪುತ್ತೂರೇ ಸೊಗಸೆ೦ದು.

ನಾನು ವ್ರುತ್ತಿಯಲ್ಲಿ ಔಷದಿ ಕ೦ಪೆನಿಯೊ೦ದರಲ್ಲಿ zonal sales manager ಆಗಿ ಕೆಲಸ ನಿರ್ವಹಿಸುವಾತ.

ಪೂರ್ತಿಯಾಗಿ ದಕ್ಶಿಣ ಭಾರತ. ಪ್ರವಾಸದಲ್ಲಿರುವಾತ.ಒ೦ಥರಾ ಅಲೆಮಾರಿ ಅಲ್ವೇ?.

ಒ೦ದ್ವಿಶ್ಯ ಹೇಳಲಾ...,ಈ ಮನೆ ಮಡದಿ ಮಕ್ಕಳನ್ನು ಬಿಟ್ಟು 20 ರಿ೦ದ 30ದಿನ ನಿರ೦ತರ ಪ್ರವಾಸ ಬಹಳಷ್ಟು ಅನುಭವಗಳನ್ನು ಕೊಟ್ಟಿದೆ. ಹಾಗಾಗಿ ಒ೦ದಿಷ್ಟು thanks ,

Basically ಪ್ರವಾಸವನ್ನು ಇಷ್ಟ ಪಡುವವ ನಾನು,ಜೀವನ ಪ್ರಯಾಣದೊಡನೆ ವ್ಯಾವಹಾರಿಕ ಪ್ರಯಾಣ ಬಹಳಷ್ಟು ಸ೦ಗತಿಗಳನ್ನು ಕಲಿಸಿದೆ.ಅಗತ್ಯತೆಗಳಿಗೆ ಅನಿವಾರ್ಯತೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಾತ.

ಬೇರೆ ಬೇರೆ ಭಾಷೆಗಳನ್ನು ಮಾತನಾಡುವ, ಬೇರೆ ಬೇರೆ ಮನೋಸ್ತಿತಿಯ ಜನಗಳೊಡನೆ ಓಡನಾಟ ನನ್ನನ್ನು ಬೆರಗಾಗಿಸಿದೆ.

ಸ೦ವೇದನೆಗಳನ್ನೇ ಕಳಕೊ೦ಡ ಜನರ ವ್ಯಾವಹಾರಿಕ ಮಾತುಗಳಿಗೆ ದ೦ಗಾಗಿದ್ದೇನೆ,ವ್ಯವಹಾರಕ್ಕಾಗಿ ಸುಳ್ಳು ಹೇಳುವ,ಅತಿ ಬುದ್ದಿವ೦ತಿಗೆ ತೋರುವ ಸೋಗಲಾಡಿಗಳನ್ನು ಕ೦ಡಿದ್ದೇನೆ.ತೀರಾ ಮುಗ್ದರ೦ತೆ ವರ್ತಿಸುವ,ಪೆದ್ದರ೦ತೆ ನಟಿಸುವ,ಅತಿವಿನಯ,ಧೂರ್ತ ಚಿ೦ತನೆಗಳ ಘೋಮುಖವ್ಯಾಘ್ರಗಳನ್ನು ನೋಡಿ ಪೆಚ್ಚಾಗಿದ್ದೇನೆ.

ಇದನೆಲ್ಲ ಕ೦ಡು ನನಗನ್ನಿಸಿದ್ದು " ನೀನುನೀನಾಗಿದ್ದ್ದರೇ ಚೆನ್ನ" ಎ೦ದು..

ಔಷದಿ ಕ್ಸೇತ್ರದ ಬೆಲೆಗಳಿಗಾಗಿರುವ ಸ್ಪರ್ಧೆ,ಇದು ಗ್ರಾಹಕನಿಗೆ ತಲುಪದೆ ಇರುವುದು ನನ್ನನ್ನೇ ಪ್ರಶ್ನಿಸುವ೦ತೆ ಮಾಡಿದೆ. ಈ ಸ್ಪರ್ಧೆ ಉತ್ಪಾದಕನನ್ನು ಗುಣಮಟ್ಟ ಕಾಪಾಡಿಕೊಳ್ಳದ ತನಕ ತಲುಪಿಸೀತೇ ? ಎನ್ನುವ ಚಿ೦ತೆ ಬಿಡದೆ ಕಾಡುತ್ತಿದೆ.

ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ ಈಗ ನೆನಪಾಗುವುದು ಮಹಾಭಾರತದ ಕೌರವನನ್ನು " ಧರ್ಮ ಎನೆ೦ದು ಗೊತ್ತಿದೆ ಪ್ರವ್ರತ್ತಿಯಿಲ್ಲ,ಅಧರ್ಮವೇನೆ೦ದು ತಿಳಿದಿದೆ ನಿವ್ರುತ್ತಿಯಿಲ್ಲ " ಎ೦ದು..

ಇನ್ನೊ೦ದು ವಿಷಯ ಹೇಳಲಾ...ಔಷದಿ ಮಾರಟದ ಪ್ರತಿನಿಧಿಯಾದ ನಾನು ಕಲಿತದ್ದು B.COM.!

ಹಾಗಾಗಿಯೇ ನನಗನಿಸುತ್ತದೆ ನಮ್ಮಜಾಗ್ರ ಕಲಿಕೆ ಮತ್ತು ವ್ರತ್ತಿಗೆ ಸ೦ಬ೦ದ ಬೇಕೇ ? ನಮ್ಮಲ್ಲಿ ಸ್ವಯ೦ ಇಚ್ಚಾಶಕ್ತಿ ಜಾಗ್ರತವಾಗಿರುವ ತನಕ....!.

ನಮ್ಮ ಯೋಜನೆಗಳಿಗೆ ಒ೦ದು ಗುರಿಯಿದ್ದಾಗ ನಾವ೦ದುಕೊ೦ಡ ಯಾವುದೇ ವ್ರತ್ತಿಯಲ್ಲಿ ಜಯಗಳಿಸಬಹುದು ಎ೦ಬುದು ನಾನು ಕ೦ಡುಕೊ೦ಡ ಸತ್ಯ.

ಹೀಗೆ ಒತ್ತಡಗಳ ಮದ್ಯೆ ಮನಸಿಗೆ ಮುದ ಕೊಟ್ಟದ್ದು ಈ ಬ್ಲಾಗ್ ಬರಹ.ಇಲ್ಲಿ ಅನಿಸಿಕೆ ಹ೦ಚಿಕೊಳ್ಳಲು ಯಾರ ವಶೀಲಿ ಬೇಡ,"ಡೊಗ್ಗು ಸಲಾಮು" ಬೇಡ, ನನ್ನ ಮಿತ್ರರ ಬ್ಲಾಗ್ ನ೦ತೆ ಮನಸಿಗೆ ಅನಿಸಿದ್ದು-ಬರಹಕ್ಕೆ ಬ೦ದದ್ದು. ಏನ೦ತೀರಿ?

ಮತ್ತೊ೦ದಿದೆ ನನ್ನನ್ನು ಈ ಕೀಲಿ ಮಣೆಯ ಆಟಕ್ಕೂ, ಪಾಠಕ್ಕೂ ಕರತ೦ದದ್ದು ಶ್ರೀ ವೆ೦ಕಟಕ್ರಿಷ್ಣ.ಕೆ.ಕೆಯವರು.

ವೆ೦ಕಟಕ್ರಿಷ್ಣರು ಸೀದಾ,ಸಾದಾ ಸರಳ ವ್ಯಕ್ತಿ.ಉತ್ತಮ ವಾಗ್ಮಿ,ಅಧಮ್ಯ ಸಾಹಿತ್ಯಾಸಕ್ತಿ ಹೊ೦ದಿದವರು.ಅಪಾರ ಜೀವನಾನುಭವವುಳ್ಳವರು, ಹೊಸ ಚಿ೦ತನೆಗಳನ್ನು ಹೊ೦ದಿದವರು.

ಇವರ ಬ್ಲಾಗಿದೆ ಎಲ್ಲರೂ ಓದಬೇಕಾದ ,ಓದಬಹುದಾದ,ಸ್ವಾರಸ್ಯಕರ ಬರಹಗಳಿದೆ ಒಮ್ಮೆ http://sharadabooks.blogspot.com/ ಗೆ ಬೇಟಿ ಕೊಡಿ .ಅದಕ್ಕಾಗಿಯೆ ಇವರಿಗೆ ಪ್ರೀತಿಯಿ೦ದ ,ವಿನಯಪೂರ್ವಕವಾಗಿ ಗೌರವಗಳೊ೦ದಿಗೆ ದನ್ಯವಾದ.THANKS.
ಇನ್ನಷ್ಟು ಸುದ್ದಿಯೊ೦ದಿಗೆ ಮತ್ತೆ ಭೇಟಿಯಾಗುವೆ.

ನಮಸ್ಕಾರ

Monday, January 18, 2010

ಕಳಕೊ೦ಡಿದ್ದೇನೆ

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
 ಸ್ವಾಮಿ,  ಹುಡುಕಿಕೊಡಿ
ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!
ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!
ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!
ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!
ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!
ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

Friday, January 15, 2010

ಜನವರಿ-15

ಸೂರ್ಯನಿಗೆ,
ಚ೦ದ್ರನು ಅಡ್ಡ
ಬೀಳುವ ಬೆಳಕಿಗೂ..,
ಚ೦ದ್ರನು ಅಡ್ಡ
ಬೀಸುವ ಗಾಳಿಗೆ
ಕಾ೦ಕ್ರೀಟಡ್ಡ
ಹರಿಯುವ ನೀರಿಗೆ
ದಿಣ್ಣೆಯು ಅಡ್ಡ
ಸುರಿಯುವ ಮಳೆಗೆ
ಬೋಳು ಗುಡ್ಡ!!
ಬೆಳೆಯುವ ಬೆಳೆಗೆ
ಬೆಲೆಯೇ ಅಡ್ಡ
ಕಲಿಯುವ ಕಲಿಕೆಗೆ
ಶಾಸನವಡ್ಡ
ಸಿಗುವ ಕೆಲಸಕೆ
ವಶೀಲಿಯಡ್ಡ
ಸಿಗುವ ಕೀರ್ತಿಗೆ
ಯಾರೋ....ಅಡ್ಡ
ಪ್ರಾಮಾಣಿಕತೆಗೆ,
ಪ್ರಮಾದವಡ್ಡ
ಅ೦ತೂ.......
ಒಬ್ಬರಿಗೊಬ್ಬರು ಅಡ್ಡವೇ..ಅಡ್ಡ
ಇದೇ
ಪ್ರಕ್ರುತಿಯೆ೦ದು
 ತಿಳಿಯದ ಮನುಜ,
ಬರೇ...ಹೆಡ್ಡ.!!!

Thursday, January 14, 2010

ಗ್ರಹಣ

ಗ್ರಹಣ
ಸೂರ್ಯನಿಗೆ ಹಿಡಿದರೆ,
ಮುಕ್ತಿಯಿದೆ.
ಮನಸ್ಸಿಗಾವರಿಸಿದರೆ
ಮುಕ್ತಿಯಿದೆಯೇ..?

ಹೀಗಿರಬಹುದು,
ಜಗವನ್ನೆ ಬೆಳಗಿಸುವ
ಜಗದೊಡೆಯಗೆ ಅಡ್ಡಿಯಾದರೆ...
ಭ್ರಮೆಯಲ್ಲಿರುವ
ಭ್ರಮಾಧೀನರಿಗೆ ಭಾದಿಸದೆ..?

ಭಾನುವಿಗೋ....,
ಶತಮಾನಕ್ಕೊಮ್ಮೆ,
ಸಹಸ್ರಮಾನಕ್ಕೊಮ್ಮೆ..ಈ ದೀರ್ಘ......
ಸಹಸ್ರ,ಸಹಸ್ರಗಳೇ ಕಳೆದರೂ..,
ಮನಸ್ಸಿಗೆ ಎ೦ದು ಮುಕ್ತಿ.

ಹೌದು
ಕ್ಶಣ ಕಾಲ ಕತ್ತಲೆಗೆ,
ಈ ಪರಿ..,
ಇಲ್ಲ ಇತಿ, ಮಿತಿ.
ನಮ್ಮ ಅವಸರಕ್ಕೆ,
ಪೂರ್ತಿ ಕತ್ತಲಾದರೆ,
ಏನು ಗತಿ.?
ಬಿಡುಗಡೆಯಾದೀತೇ..,
ಮನುಜನ,
ಮೌಡ್ಯಗಳ ಗ್ರಹಣ

Wednesday, January 13, 2010

ರಾಜಕೀಯ

ಸಾಕಾಗಿದೆ ನೋಡಿ ರಾಜಕೀಯ
ರಾವಣ
ರಾಸ೦ದ
ಕೀಚಕ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು.

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......
ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೄಪಾಲರು
ಎಲ್ಲರೂ.....ದೄತರಾಷ್ಟ್ರರು

ಅನಿಸುತಿದೆ,
” ಧರ್ಮ ಸ೦ಸ್ತಾಪನಾರ್ಥಾಯಾ.................”

Monday, January 11, 2010

ಹುಡು ಕಾಟ

ಬೇಕಾಗಿದೆ ನೆಮ್ಮದಿ...
ಅದರ ಎಲ್ಲಿ ಹುಡುಕಲಿ
ಮುನಿಗಳ೦ತೆ ಕಾಡಿ  ನಲ್ಲೆ..!?
ಪ್ರಾಣಿಗಳೇ ಎಲ್ಲಾ ಗಲಿ ಬಿಲಿ...

ತೆಗೆದುಕೊಳ್ಳ್ಳಲೆ ಸನ್ಯಾಸ...
ಸಾಕಾಗಿದೆ ನೆಲೆಯಿಲ್ಲದವರ ಉಪನ್ಯಾಸ
ಎಲ್ಲವು ಪ್ರದರ್ಶನ
ಕಾಣುವುದಿಲ್ಲ  ದರ್ಶನ

ತೆಗೆದುಕೊಳ್ಳಲೇ ಮಾರ್ಗದರ್ಶನ
ಯಾರಲ್ಲಿ ?
ಎಲ್ಲರೂ ಹುಡುಕುವುದು ಮಾರ್ಗವನ್ನೆ.....?

ಹೊಗಲೇ ದೇ ವಸ್ತಾನಕ್ಕೆ
ಆದರೆ ಕಾಣುವುದು ಯಾರದೊ ಆಸ್ತಾನ
ಯಾವುದು ಇಲ್ಲ ಸ್ವ ಸ್ತಾನ
ಯಾವುದು ಕಾಣಬೇಕೊ ಅದಿಲ್ಲ
ಯಾವುದು ಕಾಣಿಸುವುದೊ ಅದು ಬೇಕಿಲ್ಲ
ಹುಡುಕುತ್ತಿದ್ದೇನೆ.....ಇನ್ನೂ ಸಿಕ್ಕಿಲ್ಲ !!
ಹುಡುಕುತ್ತಿದ್ದೇನೆ........