Monday, May 17, 2010

ರಾಜಕೀಯ


ಸಾಕಾಗಿದೆ ನೋಡಿ ರಾಜಕೀಯ
ರಾವಣ
ರಾಸ೦ದ
ಕೀಚಕ

ಮನೆಯಿ೦ದ ಮಠದ ತನಕ
ಸಾಮನ್ಯನಿ೦ದ ಸಾಮ್ರಾಜ್ಯದ ತನಕ
ಮಾಡುವರು ರಾಜಕಾರಣ
ರಾಜರಿಗೆ ಕಾರಣವಿಲ್ಲ
ಕಾರಣವಿದ್ದವರು ರಾಜರಲ್ಲ

ಒಡೆದದ್ದು ರಾಜ್ಯಗಳನ್ನಲ್ಲ
ಜನರ ಮನಸನ್ನು
ಅಡಗಿಸಿದ್ದು ಬಿನ್ನಮತವನ್ನಲ್ಲ
ನ೦ಬಿದವರ ಸನ್ಮತವನ್ನು
.
ಹೇಳುವುದೊ೦ದು,
ಮಾಡುವುದೊ೦ದು.
ಎಲ್ಲರೂ ನೋಡುವರು
ಯಾರಲ್ಲಿ ಕೇಳುವುದೆ೦ದು..!

ಹೇಳುವರು ಐಖ್ಯತೆಯ ಗಾನ
ಮುಚ್ಚಿಡುತ್ತಾ ಕಳೆದು ಹೋದ ಮಾನ
ಹೋಗುತ್ತಿದೆ......
ಬತ್ತಲಾಗುತ್ತಿದೆ.......

ಕೊಗಿಕೊ೦ಡರೂ.........
ಆದರೇ ಎಲ್ಲರೂ....ಕುರುನೃಪಾಲರು
ಎಲ್ಲರೂ.....ದೃತರಾಷ್ಟ್ರರು

ಅನಿಸುತಿದೆ,
”ಧರ್ಮ ಸ೦ಸ್ಥಾಪನಾರ್ಥಾಯಾ"....
.......................................

Tuesday, May 4, 2010

ನಡೆಯೋಣ ಜೊತೆ ಜೊತೆಯಲೀ

ಕೋಪವೇನೇ ಶಾರದೇ

ಸವಿಮಾತಿನಲಿ ಹೇಳಬಾರದೇ

ಕಳೆದವಲ್ಲೇ ಹತ್ತು ವರುಷ

ಜೊತೆ ಜೊತೆಯಲೀ ಪಡುತ ಹರುಷ

 
ನಾ ಬ೦ದಿದ್ದೆಯಲ್ಲೇ ನಿನ್ನ ನೋಡಲೆ೦ದೂ

ನೀ ನಕ್ಕಿದ್ದೆಯ೦ದೂ ಬಾಗಿಲೆಡೆಯಲ್ಲಿ ನಿ೦ದೂ

ನಿನ್ನ ಕುಡಿನೋಟ ಓಡಾಟ ಸೆಳೆದಿತ್ತು ಅ೦ದೂ

ನಾ ಕರೆದಾಗ ನೀ ಬ೦ದೆಯಲ್ಲೇ ತಲೆತಗ್ಗಿಸುತ೦ದೂ

 
ಉರುಳಿದರುವರುಷ ನೀ ಇರುವೆಯಲ್ಲ ಹಾಗೇ

ನನ ಕಷ್ಟದಲೂ ಜೊತೆಯಾಗಿ ಪಟ್ಟಿರುವೆ ಬೇಗೇ.

ಸುಖ ದು:ಖ ಸಮವೆ೦ದು ಸ್ವೀಕರಿಸಿ ಇರುವೇ

ಖುಶಿ ಪಡುವೆ ಇರುದರಲೆ ದು:ಖಿಸದೆ ಬರಿದೇ


ನಡೆಯೋಣ ಜೊತೆ ಜೊತೆಯಲಿ ಮು೦ದಿನ್ನು ಬೇಗ

ಹ೦ಚೋಣ ಸ೦ತಸವ ,ಜೀವನ ಪೂರ್ತಿಯಾಗ

ತಿಳಿ ನೀನು ಜೀವನಕೆ ನಮಗೆ ನಾವು

ಇದು ಸತ್ಯ ,ನಮಗೆ ಬರೊ ತನಕ ಸಾವು

 
ಕೋಪವೇನೇ ಶಾರದೇ

ಸವಿಮಾತಿನಲ್ಲಿ ಹೇಳಬಾರದೇ......

ಹೇಳಬಾರದೇ......

.................................