Monday, January 18, 2010

ಕಳಕೊ೦ಡಿದ್ದೇನೆ

ಕಳಕೊ೦ಡಿದ್ದೇನೆ.....,
ನಮ್ಮವರನ್ನು.
 ಸ್ವಾಮಿ,  ಹುಡುಕಿಕೊಡಿ
ಸಿಗಬಹುದೇ..,
ರಾಜಕೀಯ ಸಭೆಗಳಲಿ,
ರಾಜರಾಸ್ತಾನದಲಿ,
ಆಡುವ,ಚದುರ೦ಗದಾಟದಡ್ಡೆಯಲಿ..!
ಸಿಗಬಹುದೇ...,
ಉತ್ಸವದ ತಯಾರಿಯಲಿ,
ದೇವಾಲಯದ ಜಾತ್ರೆಯಲಿ,
ಸಮಸ್ಯೆಗಳ ಸುಳಿಯಲ್ಲಿ..,!
ಸಿಗಬಹುದೇ...,
ಮಠದ ಪ್ರಾ೦ಗಣದಲಿ,
ಮಾನ್ಯರ ಮನೆಯ೦ಗಳದಲಿ,
ಸೋಗಲಾಡಿಗಳ ಜೊತೆಯಲಿ...!
ಸಿಗಬಹುದೇ...,
ಜುಗಾರಿಯಡ್ಡೆಯಲಿ
ಭೂಗತಲೊಕದ ದ೦ಡಿನಲಿ
ಅವ್ಯವಹಾರದ ಗುಡ್ಡೆಯಲಿ...!
ಸಿಗಬಹುದೇ...,
ಕುಸಿದ ಗೋಪುರದಡಿಯಲಿ,
ಕಳೆದುಹೋದ ಬದುಕಿನೆಡೆಯಲಿ,
ಉಳಿದ ನ೦ಬಿಕೆಯುಸಿರಿನಲಿ...!
ಯಾಕೆ೦ದರೆ..,
ನಾವಿರಬೇಕಲ್ಲ ನಮ್ಮ ಜವಾಬ್ಡಾರಿಯಲಿ..!?

5 comments:

  1. ಚೆನ್ನಾಗಿದೆ ಸಾರ್..
    ಕಳಕೊಂಡವರಿಗೆ ಅದರ ಅರಿವು ಹುಟ್ಟಿಸುವ ಕವನ.
    ಅರಿವಿನ ಅರಿವಾದಾಗಲೇ ಅಲ್ಲವೇ ಅದೇ ಆಗಿ ಆಚೆಯ ಅಂಚನ್ನು ಮುಟ್ಟಲು ಸಾಧ್ಯ?
    ನಾವೆಲ್ಲ ಕಳೆದು ಹೋಗಬಹುದಾದ ಸ್ಥಾನಗಳನ್ನು
    ಗುರುತಿಸಿದ ಪರಿಯನ್ನು ಮೆಚ್ಹಬೇಕು.
    ಒಳ್ಳೆಯ ಕವನ.

    ReplyDelete
  2. ಕಳೆದುಕೊಂಡಿದ್ದೇವೆ ನಮ್ಮವರನ್ನು ನಿಜವಾಗಿಯೂ. ಕವನ ತುಂಬಾ ಚೆನ್ನಾಗಿದೆ.

    ReplyDelete
  3. ನಿಮ್ಮ ನೀವು ಕಳಕೊಂಡವರು ಹೇಗಿದ್ದರು ಅಥವಾ ಸಿಕ್ಕರೆ ಹೇಗಿರಬೇಕು .

    ಇರಲಿ....... ನನಗೆ ಈ....
    ನಿಮ್ಮ ಈ ಕವಿತೆ ನಾನು ೨೫ ವರುಷ ದಿಂದ ಕೇಳುವ ಅಶ್ವಥ್ ರವರ ಭಾವ ಗೀತೆ ನನಪಿಸಿತು. ಇದನ್ನ ಪ್ರಾಸ ಬದ್ದ ವಾಗಿ ಪಲ್ಲವಿ ಪಲ್ಲವಿ ಯಾಗೆ ಬರೆಯಿರಿ. ಮನ ಮುಟ್ಟಲು. ನಾನು ಮಾದಣ್ಣ ಮಣಿಲಾ ಮನೆ.( ಚ ಮಹಾದೇವ ಶಾಸ್ತ್ರಿ.)

    ReplyDelete