Thursday, January 14, 2010

ಗ್ರಹಣ

ಗ್ರಹಣ
ಸೂರ್ಯನಿಗೆ ಹಿಡಿದರೆ,
ಮುಕ್ತಿಯಿದೆ.
ಮನಸ್ಸಿಗಾವರಿಸಿದರೆ
ಮುಕ್ತಿಯಿದೆಯೇ..?

ಹೀಗಿರಬಹುದು,
ಜಗವನ್ನೆ ಬೆಳಗಿಸುವ
ಜಗದೊಡೆಯಗೆ ಅಡ್ಡಿಯಾದರೆ...
ಭ್ರಮೆಯಲ್ಲಿರುವ
ಭ್ರಮಾಧೀನರಿಗೆ ಭಾದಿಸದೆ..?

ಭಾನುವಿಗೋ....,
ಶತಮಾನಕ್ಕೊಮ್ಮೆ,
ಸಹಸ್ರಮಾನಕ್ಕೊಮ್ಮೆ..ಈ ದೀರ್ಘ......
ಸಹಸ್ರ,ಸಹಸ್ರಗಳೇ ಕಳೆದರೂ..,
ಮನಸ್ಸಿಗೆ ಎ೦ದು ಮುಕ್ತಿ.

ಹೌದು
ಕ್ಶಣ ಕಾಲ ಕತ್ತಲೆಗೆ,
ಈ ಪರಿ..,
ಇಲ್ಲ ಇತಿ, ಮಿತಿ.
ನಮ್ಮ ಅವಸರಕ್ಕೆ,
ಪೂರ್ತಿ ಕತ್ತಲಾದರೆ,
ಏನು ಗತಿ.?
ಬಿಡುಗಡೆಯಾದೀತೇ..,
ಮನುಜನ,
ಮೌಡ್ಯಗಳ ಗ್ರಹಣ

1 comment: